Posts

Showing posts from April, 2017

ಒಂದು ಮಗುವಿನ ಕಥೆ...(ಮುಂದುವರೆದ ಭಾಗ)

ಶ್ರೀ ನನ್ನ ಲೇಖನಕ್ಕೆ ಬರೆದ ಕಾಮೆಂಟ್ಸ್,  ಆತನ ತಂದೆಯ ಉಲ್ಲೇಖ, ನನ್ನನ್ನು ತಂದೆಯ ನೆನಪಿಗೆ ದೂಡಿತ್ತು. ಆಂದು ಮನಸ್ಸು ಛಿದ್ರವಾಗಿತ್ತು, ಏನು ಮಾಡಲಾಗದ ಅಸಹಾಯಕತೆ, ಯಾರ ಮಡಿಲಿನಲ್ಲಿಯಾದರು ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ತೆರೆದಿಟ್ಟುಕೊಳ್ಳಬೇಕೆಂಬಷ್ಟು ದುಗುಡ! ಹೆಂಡತಿ ಆಗ ತಾನೆ ಹತ್ತಿರವಾಗುತ್ತಿದ್ದಳು!  ಅಕ್ಕಂದಿರು ಅವರದೇ ಆದ ದುಃಖದಲ್ಲಿದ್ದರು! ತಂದೆಯ ಸಾವನ್ನು ಮನಸ್ಸು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಅಪ್ಪ ಇನ್ನೂ ಬೇಕೆನಿಸುತ್ತಿದ್ದರು. ಅವರನ್ನೇ ತಬ್ಬಿಕೊಂಡು ಅಳಬೇಕೆನಿಸುತ್ತಿತ್ತು!  ತಡೆಹಿಡಿದಷ್ಟು ಕಣ್ಣೀರು ಹರಿಯುತಲಿತ್ತು! ೭೯ ವಸಂತಗಳನ್ನು ಕಂಡ ಜೀವ, ಈ ಬದುಕಿಗೊಂದು ಕೊನೆಯ ಸಲಾಮು ಹೇಳಿ, ನಿಶ್ಚಿಂತೆಯಿಂದ ಮಲಗಿತ್ತು. ಅವರ ಮುಖದ ಮೇಲಿನ ಶಾಂತತೆ, ನನ್ನ ದುಃಖವನ್ನು ದ್ವಿಗುಣಗೊಳಿಸಿತ್ತು. ಮುಖದ ಒಂದೊಂದು ಸುಕ್ಕು, ಒಂದೊಂದು ಕಥೆ ಹೇಳುತ್ತಿರುವಂತೆ ತೋರುತ್ತಿತ್ತು. ಅವರ ಜೊತೆ ಕಳೆದ ಒಂದೊಂದೇ ಘಟನೆಗಳು ಅವರಿಲ್ಲವೆಂಬ ನೆನಪು ಮಾಡಿಸಿ, ದುಗುಡವನ್ನು ಹೆಚ್ಚಿಸುತ್ತಿದ್ದವು. ಬಾಲ್ಯದಲ್ಲಿ ಅಪ್ಪನೆಂದರೆ ಭಯ! ಅವರು ಕೊಡುವ ಏಟಿನ ಗಮ್ಮತ್ತು ಇನ್ನೂ ನೆನಪಿನಲ್ಲಿದೆ! ಬಿಸಿಲಿನಲ್ಲಿ ಆಡುತ್ತಿದ್ದದ್ದನ್ನು ನೋಡಿದರೆ, ಹಿಂದಿನಿಂದ ಚಟೀರ್ ಎಂಬ ಶಬ್ದ, ನಂತರ ಉರಿ! ಬಿಸಿಲಿನಲ್ಲಿ ಆಡುವಾಗ, ದೂರದಿಂದಲೇ ಅವರು ಬರುವುದ ಕಂಡರೆ, ಎದ್ದೆನೊ, ಬಿದ್ದೆನೊ ಎಂಬಂತೆ ದೌಡು! ಅಷ್ಟು ಭಯ! ಅಪ್ಪನೊಡನೆ ಆಟವಾಡಿ

ಒಂದು ಮಗುವಿನ ಕಥೆ...

ಬಿತ್ತೊಂದು ಮುದ್ದಿನ ಕೂಸೊಂದು ತೋಳಲ್ಲಿ! ಇವನಾರೆಂಬ ನೋಟ ಪಿಳಿಪಿಳಿ ಕಂಗಳಲ್ಲಿ! ರಸಪುರಿ ಮಾವಿನ ಹಣ್ಣಿನ ತುಂಬಿದ ಕೆನ್ನೆ, ಹಲ್ಲೇ ಇಲ್ಲದ ಇಷ್ಟೆ ಇಷ್ಟು ಪುಟಾಣಿ ಬಾಯಿ! ಮುಚ್ಚಿದ ಬೆರಳಿನ ಪುಟ್ಟ ಪುಟ್ಟ ಕೈ! ಬಡಬಡ ಬಡಿಯುವ ಪುಟಾಣಿ ಕಾಲು! ಮುದ್ದಿಗೇ ಮುದ್ದು ಈ ಪುಟಾಣಿ ಜೀವ! ಮುಗ್ದತೆ ತುಂಬಿದ ಸುಂದರ ಕಾಯ! ಹಸಿವಾದರೆ ಅಳುವ, ಕನಸಲಿ ನಗುವ! ಸುಂದರ ಕಿಶೋರ, ನಮ್ಮನೆ ರಾಯ! ಮನದಲ್ಲಿ ತಿಳಿಯದ ಸಂತಸ, ಎದೆಗೊರೆಸಿಕೊಳ್ಳಬೇಕೆಂಬ ಬಯಕೆಯನ್ನು, ಸಣ್ಣ ಮಗು ಬಿದ್ದರೆ ಎಂಬ ಭಯದಿಂದ ಹಾಗೆ ಮನದಲ್ಲೇ ಅದುಮಿಟ್ಟುಕೊಂಡೆ! ಹೆಂಡತಿಯ ಮುಖದಲ್ಲಿ ಬಸವಳಿದರೂ, ಮಂದಹಾಸ ಹೊರಹೊಮ್ಮುತ್ತಿತ್ತು!  ಮಗುವಿನ ಪಕ್ಕದಲ್ಲೇ ಇರಬೇಕೆಂದು ಮನ ಬಯಸಿದರೂ, ಇತರ ಕೆಲಸಗಳು ಅದಕ್ಕೆ ಅನುವು ಮಾಡಕೊಡುತ್ತಿರಲ್ಲಿಲ್ಲ! ಮಗು! ಈ ಪದ ಕೇಳಿದರೆ ಮನಸ್ಸೊಮ್ಮೆ ತಿಳಿಯಾಗುತ್ತದೆ! ಮೊದಲೇ ನನಗೆ ಮಕ್ಕಳೆಂದರೆ ತುಂಬಾ ಇಷ್ಟ, ಅದರಲ್ಲೂ ನನ್ನದೇ ಮಗು, ಆಡಲೊಂದು ಸ್ವಂತ ಆಟಿಕೆ ಸಿಕ್ಕ ಮಗುವಿನಂತಾಗಿತ್ತು ಮನಸ್ಥಿತಿ! ಎಷ್ಟೋ ಬಾರಿ ಯೋಚನೆ ಮಾಡಿದ್ದಿದೆ! ಮಗುವಿನ ಮನಸ್ಸು ಶುಭ್ರವಾದ ಬಿಳಿಯ ಬಣ್ಣದ ವಸ್ತ್ರವಿದ್ದಂತೆ, ಏನೊಂದು ಅರಿಯದ ಅದರ ಮನಸ್ಸು ನಮ್ಮಗಳ ಕೈಯಲ್ಲಿ! ಅದಕ್ಕೆ ಅರಿವಾಗುವುದು ಹಸಿವೊಂದೇ, ಹಾಗೂ ತನ್ನೊಂದಿಗೆ ತರುವ ಆ ಅಳು! ಆ ಹಸಿವೊಂದರ ಆಧಾರದ ಮೇಲೆ, ನಾವು ಆ ಶುಭ್ರ ಬಿಳಿವಸ್ತ್ರವನ್ನು ಬದಲಾಯಿಸುತ್ತಾ ಹೋಗುತ್ತೇವೆ! ಆ ಅಳುವೆಂಬ ಒಂದೇ ಭಾವನೆಗೆ, ನಗು,

ಝಣ...ಝಣ...ಹಣದ ನಿನಾದ!

ಕುರುಡು ಕಂಚಾಣ ಕುಣಿಯುತಲಿತ್ತೊ, ಕಾಲಿಗೆ ಬಿದ್ದವರ ತುಳಿಯುತಲಿತ್ತೊ! ಕವಿಯ ಈ ನುಡಿಯಲ್ಲಿ ಎಷ್ಟೊ ಅರ್ಥವಡಗಿದೆ. ಹಣ ಎಂದೊಡನೆ ಎಲ್ಲರ ಕಿವಿ ನಿಮಿರುವುದು, ಸರ್ವವಿಧಿತ. ಹಣ ಎಂದರೆ, ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ, ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಮಾತನ್ನು ಅಕ್ಷರಶಃ ನಿಜವಾಗಿಸುತ್ತದೆ. ಪ್ರಪಂಚವೇ ಹಣದ ಸುತ್ತ ಸುತ್ತುತ್ತಿದೆ. ಎಲ್ಲ ವ್ಯವಹಾರವೂ ಹಣದ ಸುತ್ತ! ಹಣವೆಂಬ ಮಾಯಾಕುದುರೆ ಏರಿ! ಜಗವೆಂಬ ಪರ್ವತವನ್ನೇರುವ ಸಿದ್ದತೆ! ಮನವೆಂಬ ಮರ್ಕಟ ಯಮಾರಿ! ಏರಿತೇ ಪರ್ವತ? ಏರಿ ಗೆದ್ದೀತೇ? ಜಗವೆಂಬ ಸುಂದರ ಮಾಯಾನಗರಿ ಕೊಂಡುಕೊಳ್ಳುವ ಬಯಕೆ, ಬಯಸಿದೆಲ್ಲವ! ಹಸಿವನು ಜಯಿಸಲು ಹಣ ಸಾಕಂತೆ! ಮಗ, ಮಡದಿ ಸಾಕಲು ಹಣವೇ ಬೇಕಂತೆ! ಹಣವೊಂದಿದ್ದರೆ, ಪ್ರಪಂಚದಲ್ಲಿ ಏನನ್ನಾದರೂ ಪಡೆಯಬಹುದೆಂಬ ನಂಬಿಕೆ ಹಲವರದು. ಹಣವನ್ನು ಪಡೆಯುವುದಕ್ಕಾಗಿ, ಹಲವಾರು ವೇಷಭೂಷಣಗಳು, ಹಲವಾರು ಮುಖವಾಡಗಳು. ಮೋಸ, ವಂಚನೆ, ದರೋಡೆ,..ಈ ಪದಗಳ ಜನ್ಮಕ್ಕೆ, ಕಾರಣವೇ ಈ ಹಣ ಎಂದರೆ ಅತೀಶಯೋಕ್ತಿಯಲ್ಲ. ಹೌದು, ಏಕೆ ಈ ಹಣವೆಂದರೆ ನಮಗೆ ಅಷ್ಟೊಂದು ಮಮಕಾರ? ಹಣವಿಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲವೆಂಬ ಕಾರಣದಿಂದ ಹಿಡಿದು, ಸಂಬಂಧಿಕರ  ಮಧ್ಯೆ ಗೌರವವಿರುವುದಿಲ್ಲವೆಂಬ ಕಾರಣದವರೆಗೂ ಕಾರಣಗಳು ಹಲವಾರು ಹಣವೇ ಎಲ್ಲಾ ಎಂಬ ಭಾವನೆಯ ಜೊತೆಜೊತೆಗೆ ಕೂಡಿಟ್ಟ ಹಣ ಸತ್ತಾಗ ಒಯ್ಯುವುದಿಲ್ಲವೆಂಬ ಜ್ಞಾನ ದ ಆಸರೆಯೊಂದಿಗೆ ಮಾನವ ಹಣದ ಮೇಲೆ ಅವಲಂಬಿತನಾಗಿದ್